top of page

ವಿವಿಯ ಹೂಬನದಲ್ಲಿ

  • Writer: ಮಹೇಂದ್ರ ಸಂಕಿಮನೆ
    ಮಹೇಂದ್ರ ಸಂಕಿಮನೆ
  • Sep 29, 2021
  • 1 min read

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಯಾರಿಗೆ ಗೊತ್ತಿಲ್ಲ ಹೇಳಿ..? ಆ ಬೃಹತ್ತಾದ ಬೂದು ಬಣ್ಣದ ಕಟ್ಟಡ ಅಲ್ಲೊಂದು ಗಡಿಯಾರ ತುದಿಗೆ ಪುಟವಿಟ್ಟಂತೆ ಗುಲಾಬಿ ಬಣ್ಣದ ಗುಮ್ಮಟ ಕಂಡಾಗ ಅಲುಮ್ನಿಗಳು( ಹಳೆ ವಿದ್ಯಾರ್ಥಿಗಳು) ಪುಳಕಿತರಾಗುತ್ತೇವೆ.


ಏನೇ ಅಂದರೂ ವಿಶ್ವವಿದ್ಯಾಲಯದಲ್ಲಿನ ನನ್ನ/ನಮ್ಮ ಪಾಲಿನ ಅನುಭವ ವಿಶಿಷ್ಟವೇ.


ಅದರಲ್ಲೂ ವಿವಿ ಎದುರಿಗಿನ ಉದ್ಯಾನವನವಂತೂ ತೀರ ಮನಮೋಹಕ.


ನಮಗೆ ಒಂದು ದಿನ ಮುಂಜಾನೆ ವೇಳೆ ವಿಶೇಷ ತರಗತಿ ಇಟ್ಟಿದ್ದರು. ಕ್ಲಾಸ್ ಬೀಗ ತರುವವ ಬರಲಿಲ್ಲವೋ, ತಡವಾಯಿತೋ ಕ್ಲಾಸ್ ಬಾಗಿಲು ತೆರೆಯದ ಕಾರಣ ಆ ಉದ್ಯಾನವನದ ನೆಲಹಾಸಿನ‌ಮೇಲೆ ಕೂತು, ಡಿಸಿ ಪಾವಟೆ ಕೈತೋರಿದ ಕಂಚಿನ ಪ್ರತಿಮೆ ಎದುರು, ಮುಂಜಾನೆ ಸೂರ್ಯ ರಶ್ಮಿಯಲ್ಲಿ ಬ್ಯಾಗುಗಳನ್ನು ಹರವಿಕೊಂಡು ಬಯಲು ಪಾಠ ಕೇಳಿದ ಅನುಭವ ಯಾವಾಗೂ ಮರೆಯುವುದಿಲ್ಲ.

ಅಂದಹಾಗೇ, ಅಂದು ಪಾಠ ಮಾಡಿದ ಡಾ| ಎಸ್.ಎಸ್. 'ಹೂಗಾರ್' ಅವರೂ ಅವಿಸ್ಮರಣೀಯ ವ್ಯಕ್ತಿ.


(ವಿವಿ ಕುರಿತು ಇನ್ನಿತರ ಸಂಗತಿ ಈಗ್ಹಾಲಿ ಬರೆಯಲಾರೆ)



ಬಣ್ಣ ಬಣ್ಣದ ತರಹೇವಾರಿ ಹೂಗಳಂತೂ ಜೇನಿಗೂ, ನೋಡುವ ಕಣ್ಣಿಗೂ ಹಬ್ಬ. ಅದಕ್ಕೆ ಇರಬಹುದು ಆ ಗಾರ್ಡನ್ನಿನ ಹೂಗಳ ಸಮೃದ್ಧ ಮಕರಂದ ಲಭ್ಯತೆಯ ಕಾರಣ, ಕಟ್ಟಡದ ಮೇಲೆ ಅಸಂಖ್ಯ ಬೃಹಜ್ಜೇನುಗಳಿರುವುದು.


ಈಗ ಹೇಳಹೊರಟಿರುವುದು ಉದ್ಯಾನದ ಕುರಿತು.

ಯಾರಿಗಾದರೂ ಈ ಸುಂದರ ಉದ್ಯಾನವನ ನೋಡಿದರೆ ಇಲ್ಲೇ ಇರಬೇಕೆನಿಸುತ್ತದೆ. ಜುಲೈ-ಅಕ್ಟೋಬರಿನ ಡೇರೆ ಹೂಗಳೆಲ್ಲ ಗುಂಪ್ಗುಂಪಾಗಿ ಡೇರೆ ಹಾಕಿರುತ್ತವೆ. ಕೆಂಪು, ಹಳದಿ , ಬಿಳಿ ಹೂಗಳ ಗುಲಾಬಿಗಳು ಈ ಸಂದರ್ಭದಲ್ಲಿ ಅರಳಿ ನಿಂತಾಗ ನೋಡಬೇಕು.



ಹೂವಿನ ಮಳ್ಳರನ್ನು ಹುಚ್ಚರಾಗಿಸುತ್ತದೆ. ಕವಿವಿಯಲ್ಲಿ ನನ್ನ ಎಮ್.ಕಾಂ. ಮುಗಿದಿತ್ತು. ಆಗ ಅಮ್ಮನಿಗೂ ಈ ಉದ್ಯಾನವನ ತೋರಿಸಬೇಕೆಂದು ಕರೆದುಕೊಂಡು ಹೋದೆ, ಅಲ್ಲಿನ ಹೂ ಗಿಡ ಕಂಡು‌ ಈ ಬುಡ ಬೇಕು...ಈ ಗಿಡ ಬೇಕೆಂದು ಹಠ ಬಿದ್ದು ಬಿಟ್ಟಿದ್ದಳು. ಅಲ್ಲಿನ ಕೆಲಸಗಾರರ ಬಳಿ ' ನಮಗೆ ವೊಂದು ಹೆಣೆ ಕಟ್ ಮಾಡ್ಕೊಡ್ರಿ" ಎಂದು ಕೇಳಿದ್ದಳು. ಪಾಪ ಮಾಲಿ, ಇಲ್ರಿ ಹಾಂಗ್ ಮಾಡಾಕ್ ಬರುದಿಲ್ಲ ಎಂದಾಗ, ಅವಳನ್ನು ಅಲ್ಲಿಂದ ಕರೆತರುವಷ್ಟರಲ್ಲಿ ಸಾಕಾಗಿಹೋಗಿತ್ತು. ಹೂವಿನ ಪ್ರೀತಿ ಇರುವವರಿಗೆ ಆ ಉದ್ಯಾನವನವಂತೂ ಹುಚ್ಚು ಹಿಡಿಸುತ್ತದೆ. ಬರಗುವ ಗುಲಾಬಿ ಮುಳ್ಳು, ಹೂವಿನ ಮಳ್ಳಿದ್ದವರಿಗೆ ಕಾಣುವುದಿಲ್ಲ, ಅವರಿಗೆ ಕಾಣುವುದು ಅದರ ರಂಗು ರಂಗಿನ ಸೌಂದರ್ಯ ಮಾತ್ರ.


ಆ ಗಾರ್ಡನ್ನಿಂದ ಹೂಗಿಡ ತರದಿದ್ದರೂ, ಧಾರವಾಡದ ಸವಿನೆನಪಗಾಗಿ ತಂದು ,ರಸ್ತೆಬದಿಯಲ್ಲಿ ಮಾರಲಿಟ್ಟ ಗುಲಾಬಿ, ದಾಸವಾಳ, ಗಿಡ ನೆಟ್ಟದ್ದು ಅಲ್ಲಿನ ನೆನಪುಗಳಿಗೆ ಬೇಸಿಗೆಯಲ್ಲಿ ನೀರೆರೆಸಿಕೊಳ್ಳುತ್ತವೆ. ಹಳೆ ಎಲೆ ಹಳದಿಯಾಗಿ ಉದುರಿದರೂ,

ಆಗಾಗ ಹೂಬಿಟ್ಟು ನಗುತ್ತವೆ.


#ಮಹೇಂದ್ರ_ಸಂಕಿಮನೆ

 
 
 

Recent Posts

See All
ಗಾಳಿ ಮಾತು...

ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗಿ ತನ್ನ ರಾಜ್ಯವನ್ನು ಆಳುತ್ತಿರುತ್ತಾನೆ. ಹೀಗೆ ಒಂದು ದಿನ ಮಾರುವೇಷದಲ್ಲಿ ರಾಜ್ಯವನ್ನು ಸುತ್ತಾಡುತ್ತಿರುವಾಗ ಒಂದು ಗಂಡ ಹೆಂಡತಿಯ ಮದ್ಯ ಜಗಳಭರಿತ ಸಂಭಾಷಣೆಯನ್ನು ಕೇಳುತ್ತಾನೆ. ತವರಿಗೆ ಹೋದ ಹೆಂಡತಿ ಗಂಡನ ಮನೆಗ

 
 
 

Comments


Post: Blog2_Post

Subscribe Form

Thanks for submitting!

©2018 by aksharamaya.

bottom of page