top of page

ಗಾಳಿ ಮಾತು...

  • Writer: ಮಹೇಂದ್ರ ಸಂಕಿಮನೆ
    ಮಹೇಂದ್ರ ಸಂಕಿಮನೆ
  • 4 days ago
  • 1 min read

ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗಿ ತನ್ನ ರಾಜ್ಯವನ್ನು ಆಳುತ್ತಿರುತ್ತಾನೆ. ಹೀಗೆ ಒಂದು ದಿನ ಮಾರುವೇಷದಲ್ಲಿ ರಾಜ್ಯವನ್ನು ಸುತ್ತಾಡುತ್ತಿರುವಾಗ ಒಂದು ಗಂಡ ಹೆಂಡತಿಯ ಮದ್ಯ ಜಗಳಭರಿತ ಸಂಭಾಷಣೆಯನ್ನು ಕೇಳುತ್ತಾನೆ. ತವರಿಗೆ ಹೋದ ಹೆಂಡತಿ ಗಂಡನ ಮನೆಗೆ ಮರಳನ್ನು ಸ್ವಲ್ಪ ದಿನ ತಡವಾಗುತ್ತದೆ. ಆಕೆಯನ್ನು ಗಂಡನು ಮನೆಯೊಳಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಾನೆ ಹಾಗೆ ಸೇರಿಸಿಕೊಳ್ಳಲು "ನಾನೇನು ರಾಮನಲ್ಲ " ಎಂದುಬಿಡುತ್ತಾನೆ. ಈ ಮಾತು ಹೀಗೂ ಶ್ರೀ ರಾಮನ ಕಿವಿಗೆ ಬಿದ್ದುಬಿಡುತ್ತದೆ. ರಾಜಧಾನಿಗೆ ತೆರಳಿ ರಾಮನು ಈ ಆರೋಪವನ್ನು ಸಹಿಸಿಕಳ್ಳಲಾಗದೆ ಈ ಅಪವಾದವನ್ನು ದೂರಗೊಳಿಸಲು ಸೀತೆಯನ್ನು ಕಾಡಿಗೆ ಕಳಿಸುವ ತೀರ್ಮಾನ ಮಾಡಿಬಿಡುತ್ತಾನೆ.

ಆಗ ಸೀತೆ ತುಂಬು ಗರ್ಭಿಣಿ ಆಗಿರುತ್ತಾಳೆ. ಅವಳ ಪರಿಸ್ಥಿತಿಯನ್ನು ಯಾಕೆ ರಾಮ ಅರ್ಥ ಮಾಡಿಕೊಳ್ಳಲಿಲ್ಲ ಮಾಡಿಕೊಳ್ಳಲಿಲ್ಲವೋ ಗೊತ್ತಿಲ್ಲ ಪರಿಪರಿಯಾಗಿ ಪರಿಜನರು ಮಂತ್ರಿಗಳು ಸಹೋದರರೆಲ್ಲರೂ ಕೂಡ ಹೇಳಿದರು ಕೂಡ ರಾಮ ಸೀತೆಯನ್ನು ಕಾಡಿಗೆ ಕಳಿಸುವ ನಿರ್ಧಾರ ಮಾಡಿಯೇ ಬಿಡುತ್ತಾನೆ. ಆ ವನವಾಸ ಸಂದರ್ಭದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋದಾಗ ವಿರಹದಿಂದ ಅದೆಷ್ಟು ತೊಳಲಾಡಿದ್ದ ಸೀತಾರಾಮ ಇವನೇ ನಾನಿಸುವಷ್ಟು ರಾಮನ ಈ ನಡವಳಿಕೆ ವಿಚಿತ್ರ ಹುಟ್ಟಿಸುತ್ತದೆ. ಸೋಮಿ ೩ ಆಶ್ಚರ್ಯಗೊಳ್ಳುತ್ತಾನೆ. ಹಾಗೂ ರಾಮನು ಲಕ್ಷ್ಮಣನಿಗೆ ಸೀತೆಯನ್ನು ಕಾಡಿಗೆ ಬಿಟ್ಟು ಬರಲು ಆದೇಶ ಮಾಡುತ್ತಾನೆ ಕೂಡ.

ರಾವಣ ಸೀತೆಯನ್ನು ಅಪಹರಿಸಿದ ನಂತರ ಲಂಕೆಗೆ ತೆರಳಿ,ರಾವಣನನ್ನು ಕೊಂದು ಸೀತೆಯನ್ನು ರಾಮ ಬಿಡಿಸಿಕೊಳ್ಳುತ್ತಾನೆ. ಹಾಗೂ ಅಗ್ನಿ ಪ್ರವೇಶ ಮಾಡಿ ಸೀತೆಯು ಆ ಪರೀಕ್ಷೆಯಲ್ಲಿ ಗೆದ್ದು ಸ್ವತಃ ಅಗ್ನಿ ದೇವನೇ ಸೀತೆ ಪರಿಶುದ್ಧಳು ಅಕಳಂಕಿತರು ಅವಳನ್ನು ಪರಿಗ್ರಹಿಸು ಎಂದು ಹೇಳಿರುತ್ತಾನೆ ಕೂಡ. ಅವಳ ಪರಿಶುದ್ಧ ಚಾರಿತ್ಯ ಇಡೀ ಜಗತ್ತಿಗೆ ಜಾಹಿರಾಗುತ್ತದೆ. ಅಲ್ಲಿ ಯಾವ ಅನುಮಾನವೂ ವ್ಯಕ್ತ ಆಗುವುದಿಲ್ಲ. ಸೀತೆಯನ್ನು ಯಾವುದೋ ಅಗಸನ ಮಾತು ಕೇಳಿ ರಾಮ ಸಂಶಯಸಿದರೆ ಅದರ ಅರ್ಥವೇನು? ಬಂದ ಅಪವಾದಗಳನ್ನೆಲ್ಲ ಹಿಂದೆ ಮುಂದೆ ನೋಡಿದರೆ ಅದಕ್ಕೆ ಪ್ರತಿಕ್ರಿಸಿದರೆ ಬದುಕು ನಡೆಯುತ್ತದೆಯಾ? ಯಾವುದೋ ಗಾಳಿ ಮಾತಿಗೆ ಯಾವುದು ಕ್ಷಣದ ಮಾತಿಗೆ ಏನು ಅಂದಕ್ಕೆಲ್ಲ ಪ್ರತಿಕ್ರಿಯೆ ಕೈಗೊಳ್ಳಲು ಎಷ್ಟು ಸರಿಯೋ ಗೊತ್ತಿಲ್ಲ?ಯಾಕೆಂದರೆ ಸೀತೆಯನ್ನು ಪುನಃ ಒಂಟಿಯಾಗಿ ಕಾಡಿಗೆ ಕಳಿಸಿದ ರಾಮ ಕೊಟ್ಟ ಕಷ್ಟ ಯಾರಿಗೂ ಗೊತ್ತಿಲ್ಲ: ಇದರಿಂದ ಅರಸನಿಗಾಗಲಿ ಅಗಸನಿಗಾಗಲಿ ಯಾವ ಲಾಭ ಆಗಲಿಲ್ಲ ಆದರೆ ಇಡೀ ಅಯೋಧ್ಯೆ ಅಳುತ್ತಿತ್ತು ಹಾಗೂ ತೊಂದರೆ ಅನುಭವಿಸಿದವರು ಸೀತೆ ಮತ್ತು ರಾಮ ನಿರ್ದಿಷ್ಟವಾಗಿ ಅವರೇ.

ಮಡಿವಾಳನ ಮಾತು ಕೇಳಿ

ಮಡದಿಯನ್ನೇ ಕಾಡಿಗಟ್ಟಿದನೆ ರಾಮ

ಮಡುಗಟ್ಟಿತು ದುಃಖ

ಅಯೋಧ್ಯ ನಾಡಿನೊಳು ಎಲ್ಲಿಯಾರಾಮ

ಇದೊಂದು ನಿದರ್ಶನಷ್ಟೇ ಇಂತಹ ಎಷ್ಟೋ ಘಟನೆಗಳು ಈ ಕಾಲದಲ್ಲೂ ಕೂಡ ನಡೆಯುತ್ತಿರುತ್ತವೆ, ಯಾರದೋ ಮಾತು ಕೇಳಿ ಯಾವ ಯಾವುದು ಮುಖ್ಯ ನಿರ್ಧಾರಗಳನ್ನು ಕೈಗೊಂಡು ಅದರಿಂದ ಎಲ್ಲರೂ ದುಃಖಿಸುವಂಥಾಗುತ್ತದೆ. ನಾ ಘಟನೆಯಿಂದ ಯಾರಿಗೂ ಲಾಭವಿರುವುದಿಲ್ಲ ಬದಲಾಗಿ ನಷ್ಟವೇ.

 
 
 

Comments


Post: Blog2_Post

Subscribe Form

Thanks for submitting!

©2018 by aksharamaya.

bottom of page