top of page

ನಾನು ನಾನಾಗಿರಲು

  • Writer: ಮಹೇಂದ್ರ ಸಂಕಿಮನೆ
    ಮಹೇಂದ್ರ ಸಂಕಿಮನೆ
  • Dec 9, 2018
  • 1 min read

ನನ್ನ ಹೃದಯವನು ನೆಲದ ಮೇಲಿಟ್ಟು

ನಿನ್ನ ಅಡಿಗಳಿಗೆ ಹಾಸು ಇಟ್ಟಿದ್ದೆ


ಭಾವಗಳ ಯಾವುದೇ ಗೋಜಿಗೆಡೆಗೊಡದೆ

ಹೃದಯ ಮಿಡಿತವು ತಂಪುಧೂಳಲಿ ಮಿಳಿತಗೊಂಡು

ಕಣಕಣಗಳಲೂ ಪ್ರಾಕೃತಿಕನಾಗುವಾಸೆ


ದಾರ್ಷ್ಟ್ಯ ಅಹಂ ಗಳಾವುದನ್ನೂ ನಾ ಬಿಡೆ

ನೀ ಮಾಡಿದೆ ಎಂದು ನಾಪ್ರತಿ ಎಸಗಲಾರೆ


ಪಡೆದ ಅಗುಳಿಗೊಂದರಂತೆ ಉಪಕಾರಗೈವೆ

ನಿನ್ನ ಮಾತುಗಳಿರಲಿ ಕೊನೆಗೆ ನಿನ್ನ ಬಳಿಯೆ


ಮರೆತರೂ ನನ್ನನ್ನು ನೆನಪಿಡುವೆ ನಿನ್ನನ್ನು

ಅನ್ನದಗುಳಿಗಾಗಿ ಜಗಳ ಬೇಡ

ತಿನ್ನುವುದು ಇನಿತಿರಲು ಬೇರೆಮಾತುಗಳೇಕೆ


ಬರಲಿ ಬಿಡು ಬಳಿಸಾರಿ ಉರುಳೆ ಕಾಲದ ಚಕ್ರ

ಬೇಸರವು ನನಗಿಲ್ಲ ಮೋಸ ವಂಚನೆ ಯಿಂದ


ತಪ್ಪಿನಲಿ ಮಾತೆದ್ದು ಸರಿಗಳಲಿ ಮೌನಗಾನ

ಇದೆಂತ ಪರಿಯ ಬದುಕು ಸತ್ವ ವಿಹೀನ


ಬಂದ ಕಾಲಕೆ ನಾ ಅಂದ ಮಾತುಗಳು ಸರಿಯಾಗೆ

ನೀ ಅಹುದೆಂದು ನಿನ್ನೊಳಗೆ ಬದಲಾಗೆ

ಸರಿಗೊಂಡು ಬದುಕು ಚಲಿಸೆ ಲಘುವಾಗಿ

ಕಾಲದಲಿ ಬೆರೆತು ಹಸನಾಗಲಿಬಾಳು


-ಮಹೇಂದ್ರ ಸಂಕಿಮನೆ

 
 
 

Recent Posts

See All
ಗಾಳಿ ಮಾತು...

ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗಿ ತನ್ನ ರಾಜ್ಯವನ್ನು ಆಳುತ್ತಿರುತ್ತಾನೆ. ಹೀಗೆ ಒಂದು ದಿನ ಮಾರುವೇಷದಲ್ಲಿ ರಾಜ್ಯವನ್ನು ಸುತ್ತಾಡುತ್ತಿರುವಾಗ ಒಂದು ಗಂಡ ಹೆಂಡತಿಯ...

 
 
 

Comments


Post: Blog2_Post

Subscribe Form

Thanks for submitting!

©2018 by aksharamaya.

bottom of page