top of page

ಹೊಸಗನಸು

  • Writer: ಮಹೇಂದ್ರ ಸಂಕಿಮನೆ
    ಮಹೇಂದ್ರ ಸಂಕಿಮನೆ
  • Dec 9, 2018
  • 1 min read

ತಣ್ಣನಕುಳಿರ್ಗಾಳಿ ನನ್ನೆದೆಯ ಸೇರಿರಲು

ಬೆಚ್ಚನೆಯ ಎದೆಗೂಡಥಂಡಿ ಕೊರೆದಿಹುದು

ನಸುಬಣ್ಣದ ಸೂರ್ಯರಶ್ಮಿ ಕಣ್ಣ ಸೋಕಿರಲು

ಮನದ ಕನಸಿನ ಮೊಳಕೆಗೆ ನೀರನೆರೆವ ತೆರದಿ

ಮನೆಯೊಳಗು ಮನದೊಳಗು ಎಲ್ಲೆಲ್ಲು ಬೆಳಕು

ಹೇಮಂತದ ಮರದಂತೆ ಬಾಹ್ಯ ಪರ್ಣಗಳ ಕೊಡವಿ

ಸುಪ್ತಪಲ್ಲವಿಯಂತೆ ಕನಸು ಕಾದಿತ್ತುಹೊರಬರಲು

ಅದ್ಧೂರಿ ಕನಸು ಇಂಬು ಬಯಸಿದೆ ಭಂಗತೆಯ ಮರೆತು

ಹರಡಿರುವ ಈ ಕನಸ ಹಂದರಕೆ ನೀಡುವೆಯಾ

ನಿನ್ನ ಬೆಂಬಲವ.


-ಮಹೇಂದ್ರ ಸಂಕಿಮನೆ

 
 
 

Recent Posts

See All
ಗಾಳಿ ಮಾತು...

ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗಿ ತನ್ನ ರಾಜ್ಯವನ್ನು ಆಳುತ್ತಿರುತ್ತಾನೆ. ಹೀಗೆ ಒಂದು ದಿನ ಮಾರುವೇಷದಲ್ಲಿ ರಾಜ್ಯವನ್ನು ಸುತ್ತಾಡುತ್ತಿರುವಾಗ ಒಂದು ಗಂಡ ಹೆಂಡತಿಯ...

 
 
 

Comments


Post: Blog2_Post

Subscribe Form

Thanks for submitting!

©2018 by aksharamaya.

bottom of page