top of page

" ಹೋಗಬೇಡ ನನ್ನ ಬಿಟ್ಟು"

  • Writer: ಮಹೇಂದ್ರ ಸಂಕಿಮನೆ
    ಮಹೇಂದ್ರ ಸಂಕಿಮನೆ
  • Oct 1, 2019
  • 1 min read

ಹೋಗೊ ಮಾತನ್ನೆ ನುಡಿಯಬೇಡ

ನಡೆವ ಹಠವನ್ನು ಮಾಡಬೇಡ..


ನಿನ್ನ ತಬ್ಬಿ ನಾ ಕುಳಿತಿರೆ

ನಿನ್ನ ಅಪ್ಪಿ ನಾ ಕುಳಿತಿರೆ

ಇಂದು ನಡೆವೆ ಎಂದೆಂತು ನುಡಿಯಬೇಡ..


ನನ್ ಉಸಿರೆ ನಿಂತಂತಿದೆ

ನಾ ಪೂರಾ ಸೂರೆಯಾದಂತಿದೆ

ಇಂಥ ಮಾತನ್ನು ನೀ ನುಡಿವೆ ಏಕೆ?

ನಡೆವ ಹಠವನ್ನು ಮಾಡಬೇಡ..

ಹೋಪ ಮಾತಂತು ಬೇಡ ಬೇಡ


ನೀ ಕೊಂಚ ಆಲೋಚಿಸು

ನನ್ನ ಮತ್ತೆ ಆಲಂಗಿಸು..

ನೀ ಹೊರಟಾಗ ನಿಲಿಸದಿದ್ದರೆ ತಡೆದು

ಎದ್ದು ನಡೆವಾಗ ನೀನು, ನನ ಜೀವವೇ ಹೊರಟಂತೆ ಹೇ ನಲ್ಲೆ..

ನಡೆವ ಹಠವನ್ನು ಮಾಡಬೇಡ..

ನಡೆವ ಹಠವನ್ನು ಮಾಡಬೇಡ..


ನಿನ್ನಾಣೆ ನಿನೆನ್ನ ಜೀವ ಜಾಣೆ

ನನ್ನೀ ಮಾತು ಕೇಳು ಒಮ್ಮೆ

ನಡೆವ ಹಠವನ್ನು ಮಾಡಬೇಡ

ನಡೆವ ಮಾತನ್ನು ನುಡಿಯಬೇಡ..


ಕಾಲ ಬಂಧನದಿ ಈ ಜೀವನಯಾನ

ಆದರೆ..

ಚಂದ್ರ ಸಮಯದಲಿ ಸ್ವಾತಂತ್ರ್ಯವಿಹುದು

ಇದನೆಲ್ಲ ತೊರೆದು ಒ ನಲ್ಲೆ

ಜೀವನವಿಡೀ ಕಾಡಬೇಡ..

ನಡೆವ ಹಟವನ್ನು ಮಾಡಬೇಡ..


ಎಷ್ಟು ಮುದ್ದಾದ ಬಣ್ಣ ಹರಡಿದೆ ನೋಡು ನೀನು..

ಇಂದು ಪ್ರೀತಿ ಪ್ರೇಮವನೆ ಚೆಲ್ಲಾಡಿದೆ

ನಾಳೆಯಾ ಪರಿವೆ ಯಾತಕ್ಕೆ ಬೇಕು

ಇಂದಿನಾ ರಾತ್ರಿಯು ನಿಂತರೆ.. ಸಾಕು

ನೀ ನಡೆವ ಮಾತನ್ನು ಆಡಬೇಡ


ಉಸಿರೇ ಹೋದಂತಿದೆ..

ನಾ ಸೂರೆಯಾದಂತಿದೆ..

ನಡೆವ ಹಠವನ್ನು ಮಾಡಬೇಡ

ನಡೆವ ಮಾತನ್ನೇ ಆಡಬೇಡ


"ಭಾವಗೋಚರ"

ಭಾವಾನುವಾದ -ಆಜ್ ಜಾನೆ ಕಿ ಜಿದ್ ನ ಕರೋ

ಮಹೇಂದ್ರ ಸಂಕಿಮನೆ

 
 
 

Recent Posts

See All
ಗಾಳಿ ಮಾತು...

ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗಿ ತನ್ನ ರಾಜ್ಯವನ್ನು ಆಳುತ್ತಿರುತ್ತಾನೆ. ಹೀಗೆ ಒಂದು ದಿನ ಮಾರುವೇಷದಲ್ಲಿ ರಾಜ್ಯವನ್ನು ಸುತ್ತಾಡುತ್ತಿರುವಾಗ ಒಂದು ಗಂಡ ಹೆಂಡತಿಯ...

 
 
 

Comments


Post: Blog2_Post

Subscribe Form

Thanks for submitting!

©2018 by aksharamaya.

bottom of page